- ಶೇಖರ ಚಿತ್ರಾಪು
ನಮ್ಮ ಪೃಥ್ವಿಗೆ ಎಲ್ಲಕ್ಕೂ ಹೆಚ್ಚು ಭೀತಿಯಿರುವುದು ತಲೆಯಮೇಲಿಂದ ಬೀಳಬಹುದಾದ ಲಘುಗ್ರಹ ಮತ್ತು ಉಲ್ಕಾಪಿಂಡಗಳಿಂದ. ಖಗೋಳಶಾಶ್ತ್ರಜ್ಞರು ಪ್ರಖರ ಸಂಶೋಧನೆಗಳಿಂದ ಕಂಡುಹಿಡಿದಿರುವಂತೆ, ನಿಖರ ಮಾಹಿತಿ ಪಡೆದು ಮಾಡಿರುವಂತೆ, ಬೃಹತ್ ಗಾತ್ರದ ಲಘಗ್ರಹವೊಂದು ಇನ್ನು 159 ವರ್ಷಗಳ ನಂತರ, ಸುಮಾರು ಇಸವಿ 2182ರ ವೇಳೆಗೆ ಭೂಮಿಯನ್ನು ಅಪ್ಪಳಿಸಿ ಅಗಾಧ ಪ್ರಮಾಣದ ವಿಧ್ವಂಸವೆಸಗೀತು.
ಈ ಸಂಬವನೀಯ ಪರಗ್ರಹ ದಾಳಿಯನ್ನೆದುರಿಸಿ - ವಸುಂಧರೆ ಹಾಗೂ ಆಕೆಯ ಅಷ್ಟಶತಕೋಟಿ ಮನುಜರನ್ನೂ ಅಸಂಖ್ಯ ಜೀವಿಗಳನ್ನೂ ಉಳಿಸಲು ಸಂಶೋಧಕರು ಅಂತರಾಳದಲ್ಲೇ ಅಣುಬಾಂಬೊಂದನ್ನು ಸ್ಪೋಟಿಸುವ ಪ್ರಯೋಗವೊಂದನ್ನು ಮಾಡಲು ಮುಂದಾಗಿದ್ದಾರೆ. 524 ಮೀಟರ್ ವ್ಯಾಸದ ಈ ರಾಕ್ಷಸಗಾತ್ರ ಗ್ರಹ ಭೂಮಿಗೆ ಮುಖಮಾಡಿ ಗಂಟೆಗೆ 63000 ಮೈಲು ಧಾವಿಸುತ್ತಿರುವ ಬಗ್ಯೆ ಜಗದೆಲ್ಲ ಶಾಶ್ತ್ರಜ್ಞರು ಚಿಂತಿತರಿದ್ದಾರೆ. ಕಾರಣ ಅದು ಅಪ್ಪಳಿಸಿದಾಗಾಗುವ ಊರ್ಜ ಬಿಡುಗಡೆ 1200 ಮೆಘಾಟನ್! (1 ಮೆಘಾಟನ್ = 1 ಮಿಲಿಯ ಟನ್ TNT), ಮೆಟಾಟನ್! ಅನೇಕ ಅಣುಬಾಂಬ್ ಗಳಿಗಿಂತ ಅಧಿಕ. ನಮ್ಮನ್ನೆಲ್ಲಾ ಸುಟ್ಟುಬಿಡುವಷ್ಟು ಭಯಾನಕ. ಎಂದೇ ನಾಸಾ ವಿಜ್ಞಾನಿಗಳು ಬೆನ್ನು ವಿನ ಸ್ಯಾಂಪಲ್ ಕ್ರೋಢೀಕರಿಸಿ ಅಭ್ಯಾಸದಲ್ಲಿ ತೊಡಗಿದ್ದಾರೆ. ಅವರ ದೃಢ ನಿರ್ಣಯ - ಪೃಥ್ವಿಯಿಂದ ದೂರ, ಲಕ್ಷ ಕೀಮೀ. ಅಂತರದಲ್ಲಿ ಈ ಉಲ್ಕಾಪಿಂಡವನ್ನು ಸ್ಪೋಟಿಸಿಬಿಡುವುದು!
ಸಂಶೋಧನಾ ಪ್ರಮುಖ ಮಾರಿ ಬರ್ಕಿ ಹೇಳುತ್ತಾರೆ, "ಬೆನ್ನು ಉಲ್ಕಾಪಿಂಡ ಭೂಮಿಗೆ ಮುಖವಿಟ್ಟು ಧಾವಿಸಿಬರುವ ಮಾಹಿತಿ ಕೆಲವು ತಿಂಗಳ ಹಿಂದೆಯೇ ಆಧುನಿಕ ತಂತ್ರಜ್ಞಾನ ಮೂಲಕ ನಮಗೆ ತಿಳಿದಿತ್ತು. ಅದನ್ನು ತಡೆಯಲು, ಅದರ ಕ್ರಮಣ ಮಾರ್ಗಕ್ಕೆ ತಡೆಯೊಡ್ಡಿ ಧಾವಿಸುವ ದೆಸೆಯನ್ನು ಬದಲಿಸುವುದು ಯಾ ಸಾಕಷ್ಟು ದೂರದಲ್ಲೇ ಅಣುಹಲ್ಲೆಯಿಂದ ಆ ಗ್ರಹವನ್ನು ಸ್ಪೋಟಗೊಳಿಸಿ ನಾಶಪಡಿಸುವುದು. ಇವೆಲ್ಲಾ ಪ್ರಥ್ವಿಗೆ ಸಾಕಷ್ಟು ಅಂತರದಲ್ಲೇ ನಡೆಯುವುದರಿಂದ ಭೂಮಿಗ್ಯಾವ ಪರಿಣಾವೂ ಆಗದು. ಸ್ಪೋಟಗೊಂಡ ಗ್ರಹದ ಸಣ್ಣಸಣ್ಣ ತುಣುಕುಗಳು ಅಂತರಾಳದಲ್ಲಿ ತೇಲಿ ಸುತ್ತುತ್ತಲಿರುತ್ತವೆ".
ಇವೆಲ್ಲ ಆಗುವ ಹೊತ್ತಿಗೆ ನಾವು ನೀವೆಲ್ಲ
ಇರಲಾರೆವಾದರೂ, ಆ ಹೊತ್ತಿನ ನಮ್ಮ ಮರಿಮಕ್ಕಳು ಈ ಆಪತ್ತುನ್ನು ಈಗ ನಾವು ಹಾಕಿಕೊಂಡಿರುವ ಯೋಜನೆಗಿಂತಲೂ ಅತ್ಯಂತ ಸಕ್ಷಮ ಮತ್ತು ಶೀಘ್ರವಾಗಿ, ಖಂಡಿತವಾಗಿಯೂ ಎದುರಿಸಿ ಜೈಸಿಯಾರು. ಆ ವೇಗದಲ್ಲಿ ತಂತ್ರಜ್ಞಾನ ಮುಂದುವರಿದಿದೆ. ಹಾಗಾಗಲಿ.