ಶ್ರೀ ಕ್ಷೇತ್ರ ಪೆರ್ಣಂಕಿಲ : ಎಪ್ರಿಲ್ 9 ರಿಂದ 13 ರವರೆಗೆ ಭಕ್ತಿ ಸಿದ್ಧಾಂತೋತ್ಸವ - ರಾಮೋತ್ಸವ

tulunadlife official
0


ಶ್ರೀ ಪೇಜಾವರ ಅಧೋಕ್ಷಜ ಮಠ ಉಡುಪಿ, ಅಖಿಲ ಭಾರತ ಮಾಧ್ವ ಮಹಾಮಂಡಲ, ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ ಬೆಂಗಳೂರು ಹಾಗೂ ಅನೇಕ ಸಂಸ್ಥೆಗಳ ಸಯುಕ್ತ ಆಶ್ರಯದಲ್ಲಿ ದಿನಾಂಕ 9-4-2025 ರಿಂದ ದಿನಾಂಕ 13-4-2025 ರವರೆಗೆ ಪುಣ್ಯಸ್ಥಳ ಪೆರ್ಣಂಕಿಲ ಶ್ರೀಮಹಾಲಿಂಗೇಶ್ವರ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಭಕ್ತಿ ಸಿದ್ಧಾಂತೋತ್ಸವ - ರಾಮೋತ್ಸವ ಜರುಗಲಿದೆ.


ಆ ಪ್ರಯುಕ್ತ ದಿನಾಂಕ 30-3-2025 (ಚಾಂದ್ರಮಾನಯುಗಾದಿ) ಇಂದ ದಿನಾಂಕ 9-4-2025 ಬುಧವಾರದವರೆಗೆ ಭಕ್ತಿ ರಥಯಾತ್ರೆ ನಡೆಯಲಿದೆ. 


ಅದೇ ರೀತಿ ದಿನಾಂಕ 2025 ರ ಎಪ್ರಿಲ್ 11 ರ ಶುಕ್ರವಾರ ಬೆಳಿಗ್ಗೆ 7 ರಿಂದ  ಸಮಾಜದಲ್ಲಿ ಇತ್ತೀಚಿಗೆ ಕಂಡು ಕೇಳರಿಯದ ರೀತಿಯಲ್ಲಿ ಸಂಭವಿಸುತ್ತಿರುವ ಅಪಮೃತ್ಯು - ಅಕಾಲಮೃತ್ಯು ವೇ ಮೊದಲಾದ ಕಂಟಕ ನಿವಾರಣೆಗಾಗಿ ಪ್ರಾರ್ಥಿಸಿ  "ಮನ್ಯುಸೂಕ್ತ ಯಾಗ ಹಾಗೂ ಮಹಾ ಮೃತ್ಯುಂಜಯ ಯಾಗ"  ಜರುಗಲಿದೆ. 


ಎಪ್ರಿಲ್ 12 ರ ಶನಿವಾರ ಬೆಳಿಗ್ಗೆ 7 ರಿಂದ ಸಮಸ್ತ ಗೋವಂಶದ ಮೇಲಿನ ದುರಾಕ್ರಮಣ, ಹಿಂಸೆ ಹಾಗೂ ಗೋ ಹತ್ಯೆಯಾಣ್ತ್ಯಾ, ಗೋವಂಶದ ಸುರಕ್ಷೆ, ಸಮೃದ್ಧಿಗಾಗಿ ಪ್ರಾರ್ಥಿಸಿ ನಡೆಸಲಾದ ಕೋಟಿ ವಿಷ್ಣು ಸಹಸ್ರನಾಮ ಪಾರಾಯಣ ಅಭಿಯಾನದ ಸಮರ್ಪಣಾಂಗ "ಬೃಹತ್ ವಿಷ್ಣು ಸಹಸ್ರ ನಾಮ ಯಾಗ ಹಾಗೂ ಗೋ ಸೂಕ್ತ ಯಾಗ" ನಡೆಯಲಿರುವುದು.


ಅದೇ ರೀತಿ ಎಪ್ರಿಲ್ 13 ಆದಿತ್ಯವಾರ ಬೆಳಿಗ್ಗೆ 7 ರಿಂದ ಪ್ರತಿಯೊಬ್ಬ ಸನಾತನಿ ಮತ್ತು ಪ್ರತೀ ಹಿಂದೂವಿನ ಕೌಟುಂಬಿಕ ಶ್ರೇಯಸ್ಸು ಹಾಗೂ ಧರ್ಮಕಾರ್ಯ, ರಾಷ್ಟ್ರೋನ್ನತಿಯ ಕಾರ್ಯಗಳಿಗೆ ಪ್ರೇರಣೆ ಪಡೆಯುವ ಉದ್ದೇಶದಿಂದ ನಡೆಸಲಾದ ದಶಕೋಟಿ ರಾಮ ತಾರಕ ಮಂತ್ರ ಜಪಯಜ್ಞದ ಸಮರ್ಪಣಾಂಗ "ರಾಮ ತಾರಕ ಮಂತ್ರ ಯಾಗ ಹಾಗೂ ಸೀತಾರಾಮ ಕಲ್ಯಾಣೋತ್ಸವ" ಜರುಗಲಿರುವುದು.


ಆಸಕ್ತರು ಒಂದು ಪೂರ್ಣ ಯಾಗ ಕಾಣಿಕೆ ನೀಡಿ ಸೇವಾ ಸಂಕಲ್ಪದಾರರಾಗಲು ಅವಕಾಶವಿದೆ. 





Post a Comment

0Comments

Post a Comment (0)

#buttons=(Ok, Go it!) #days=(20)

Our website uses cookies to enhance your experience. Check Now
Ok, Go it!